Asianet Suvarna News Asianet Suvarna News

ಹೀಟ್‌ವೇವ್‌ ಎಫೆಕ್ಟ್‌, ನಿಮ್ಮ ಜೇಬಿನ ಮೇಲೂ ಪರಿಣಾಮ ಬೀರೋದು ಗ್ಯಾರಂಟಿ ಎಂದ ತಜ್ಞರು!

ದೇಶದಲ್ಲಿ ಹೀಟ್‌ವೇವ್‌ ಪರಿಣಾಮ ವ್ಯಾಪಕವಾಗಿದೆ. ಇದು ಕೃಷಿ ಉತ್ಪನ್ನಗಳ ಉತ್ಪಾದನೆಯ ಮೇಲೂ ದೊಡ್ಡಮಟ್ಟದಲ್ಲಿ  ಪರಿಣಾಮ ಬೀರಲಿದ್ದು, ಆಹಾರ ಧಾನ್ಯಗಳ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
 

Heat wave Efect could burn a hole in your pocket san
Author
First Published May 1, 2024, 5:46 PM IST

ನವದೆಹಲಿ (ಮೇ.1): ತೀರಾ ಅಪರೂಪ ಎನ್ನುವಂತೆ ಪ್ರಸ್ತುತ ಇಡೀ ಭಾರತದಲ್ಲಿ ಹೀಟ್‌ವೇವ್‌ ವ್ಯಾಪಕವಾಗಿ ಬೀಸುತ್ತಿದೆ. ಇಡೀ ಭಾರತದಲ್ಲಿ ಏಪ್ರಿಲ್‌ ತಿಂಗಳ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ತೀವ್ರವಾಗಿ ಏರಿಕೆ ಕಂಡಿದೆ. ಇದರ ನಡುವೆ ಭಾರತೀಯ ಹವಾಮಾನ ಇಲಾಖೆಯ ತಜ್ಞರು ಹೀಟ್‌ವೇವ್‌ನಿಂದ ಭಾರತಕ್ಕೆ ತಕ್ಷಣದ ರಿಲೀಫ್‌ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಒಂದೆಡೆ ಹೀಟ್‌ವೇವ್‌ ಕಂಡೀಷನ್‌ನಿಂದ ಆರೋಗ್ಯದ ಮೇಲೆ ದೊಡ್ಡಮಟ್ಟದ ಪರಿಣಾಮ ಬೀರುತ್ತಿದೆ. ಇದರ ನಡುವೆ ದೇಶದ ಕೃಷಿ ಉತ್ಪಾದನೆಯ ಮೇಲೆ ಇದರ ಪರಿಣಾಮ ಗಂಭೀರವಾಗಿ ಬೀರಬಹುದು ಎಂದು ಎಕಾನಾಮಿಸ್ಟ್‌ಗಳು ಎಚ್ಚರಿಸಿದ್ದಾರೆ. ಇದರಿಂದಾಗಿ ದೇಶದಲ್ಲಿ ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಗಬಹುದು ಎಂದಿದ್ದಾರೆ.  ತೀವ್ರಗೊಳ್ಳುತ್ತಿರುವ ಶಾಖದ ಅಲೆಯು ಕೃಷಿ ಉತ್ಪಾದಕತೆಯನ್ನು ಕುಂಠಿತಗೊಳಿಸಬಹುದು ಮತ್ತು ಹಣದುಬ್ಬರವು 30-50 ಬೇಸಿಸ್ ಪಾಯಿಂಟ್‌ಗಳ ಏರಿಕೆಗೆ ಕಾರಣವಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ತರಕಾರಿ ಬೆಲೆಗಳು ಏರಿಕೆ ಕಾಣುತ್ತಿರುವ ನಡುವೆಯೂ ಈ ಎಚ್ಚರಿಕೆಯನ್ನು ಎಕಾನಾಮಿಸ್ಟ್‌ಗಳು ನೀಡಿದ್ದಾರೆ. ಸಾಮಾನ್ಯ ಮಾನ್ಸೂನ್ ಆರಂಭವಾಗುವ ಜೂನ್‌ನವರೆಗೆ ಹಣದುಬ್ಬರವು ಹೆಚ್ಚಿನ  ಪ್ರಮಾಣದಲ್ಲಿಯೇ ಇರಲಿದೆ ಎಂದು ತಿಳಿಸಿದ್ದಾರೆ.


ಡಿಬಿಎಸ್ ಗ್ರೂಪ್ ರಿಸರ್ಚ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಹಿರಿಯ ಅರ್ಥಶಾಸ್ತ್ರಜ್ಞರಾದ ರಾಧಿಕಾ ರಾವ್, ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಡೈನಾಮಿಕ್ಸ್‌ನಲ್ಲಿ ಸ್ಥಿರವಾಗಿ ಪಾತ್ರವಹಿಸಿರುವ ಹಸಿ ಆಹಾರ ಪದಾರ್ಥಗಳು, ವಿಶೇಷವಾಗಿ ತರಕಾರಿಗಳ ದುರ್ಬಲತೆಯನ್ನು ಎತ್ತಿ ತೋರಿಸಿದ್ದಾರೆ. "ಹೀಟ್‌ವೇವ್‌ನ ಪ್ರಭಾವವು ಹಾಳಾಗುವ ಹಸಿ ಆಹಾರ ಪ್ರಭೇದಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ, ವಿಶೇಷವಾಗಿ ತರಕಾರಿಗಳಲ್ಲಿ ಇದು ವ್ಯಾಪಕವಾಗಿದೆ '  ಎಂದು ರಾವ್ ದಿ ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಅನುಕ್ರಮ ಬೆಲೆ ಏರಿಕೆಯ ವೇಗವನ್ನು ಅವಲಂಬಿಸಿ, ಹಣದುಬ್ಬರದ ಪ್ರಭಾವವು 30-50 ಬೇಸಿಸ್ ಪಾಯಿಂಟ್‌ಗಳಿಂದ ಇರಬಹುದು ಎಂದು ರಾವ್ ಸೂಚಿಸಿದರು, ಇದು ಈ ಅವಧಿಯಲ್ಲಿ ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಈಗಿರುವ ಹೀಟ್‌ ವೇವ್‌ ಗ್ರಾಮೀಣ ಕೃಷಿ ಆದಾಯ, ಆಹಾರ ಹಣದುಬ್ಬರ ಮತ್ತು ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆಯಿದೆ" ಎಂದು ಕೇರ್‌ಎಡ್ಜ್‌ನ ಮುಖ್ಯ ಅರ್ಥಶಾಸ್ತ್ರಜ್ಞ ರಜನಿ ಸಿನ್ಹಾ ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ, ಗ್ರಾಹಕರ ಹಣದುಬ್ಬರವು 10 ತಿಂಗಳುಗಳಲ್ಲಿ 4.9% ಕ್ಕೆ ಇಳಿದಿದೆ, ಆದರೆ ಆಹಾರ ಹಣದುಬ್ಬರವು 8.5% ನಲ್ಲಿ ಉಳಿದಿತ್ತು. ಮುಖ್ಯವಾಗಿ ತರಕಾರಿ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡಿತ್ತು. ತರಕಾರಿ ಬೆಲೆಗಳಲ್ಲಿ ಶೇ. 28ರಷ್ಟು ಏರಿಕೆಯಾಗಿದೆ. ಸತತ ಐದು ತಿಂಗಳಿನಿಂದ ತರಕಾರಿ ಹಣದುಬ್ಬರ ಎರಡಂಕಿಯಲ್ಲಿಯೇ ಇದೆ. ಈ ತ್ರೈಮಾಸಿಕದಲ್ಲಿ ಇದು ಸರಾಸರಿ 28% ಆಗಬಹುದು ಎಂದು ತಜ್ಞರು ಊಹಿಸಿದ್ದಾರೆ.  ಹೆಚ್ಚುವರಿಯಾಗಿ, ತಜ್ಞರು ಹಣ್ಣುಗಳ ಬೆಲೆಯಲ್ಲಿ ಏರಿಕೆಯನ್ನು ನಿರೀಕ್ಷೆ ಮಾಡಿದ್ದಾರೆ. ಹಣ್ಣುಗಳು ಮತ್ತು ತರಕಾರಿಗಳು ಹಣದುಬ್ಬರದ ಪ್ರಮಾಣದಲ್ಲಿ ಒಟ್ಟು ತೂಕದ 8.9% ರಷ್ಟಿದೆ.

Lok Sabha elections Phase 2: ಹೀಟ್‌ವೇವ್‌ ಎಚ್ಚರಿಕೆ ನೀಡಿದ ಇಲಾಖೆ, ಬೆಳಗ್ಗೆಯೇ ಮತದಾನ ಮಾಡಿದ್ರೆ ಬೆಸ್ಟ್‌

ಹೀಟ್‌ವೇವ್‌ ಕಂಡೀಷನ್‌ನಲ್ಲಿ ಲಾಜಿಸಿಕ್‌ ಸವಾಲುಗಳು ಕೂಡ ಎದುರಾಗಲಿರುವ ಕಾರಣ ಹೆಚ್ಚಿನ ಸಮಸ್ಯೆ ಸೃಷ್ಟಿಯಾಗಬಹುದು ಎಂದು ತಿಳಿಸಿದ್ದಾರೆ. ಮಾನ್ಸೂನ್ ಮಳೆಯು ಸರಾಸರಿಗಿಂತ ಕಡಿಮೆಯಿದ್ದರೆ ಶಾಖದ ಅಲೆಗಳು ಖಾರಿಫ್ ಋತುವಿನ ಮೇಲೆ ಪರಿಣಾಮ ಬೀರಬಹುದು, ಇದು ಜಲಾಶಯದ ಮಟ್ಟದಲ್ಲಿ ಮತ್ತಷ್ಟು ಕುಸಿತಕ್ಕೆ ಕಾರಣವಾಗುತ್ತದೆ.

ಬೆಲೆಯೇರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗುಡ್ ನ್ಯೂಸ್; ಜೂನ್ ಬಳಿಕ ಆಹಾರ ಪದಾರ್ಥಗಳ ಬೆಲೆ ಇಳಿಕೆ

ಕೃಷಿಯ ಮೇಲೆ ಏರುತ್ತಿರುವ ತಾಪಮಾನದ ಸಂಯೋಜಿತ ಪರಿಣಾಮ, ವಿಶೇಷವಾಗಿ ಹಸಿ ಬೆಳೆಗಳು, ಸಂಭಾವ್ಯ ಪೂರೈಕೆ ಸರಪಳಿ ಅಡೆತಡೆಗಳೊಂದಿಗೆ, ಮುಂದಿನ ತಿಂಗಳುಗಳಲ್ಲಿ ಆಹಾರ ಬೆಲೆಗಳು ಮತ್ತು ಹಣದುಬ್ಬರದ ಡೈನಾಮಿಕ್ಸ್‌ಗೆ ಗಮನಾರ್ಹ ಸವಾಲುಗಳನ್ನು ಒಡ್ಡುತ್ತದೆ.

Follow Us:
Download App:
  • android
  • ios