Asianet Suvarna News Asianet Suvarna News

Today Horoscope: ಈ ರಾಶಿಯವರಿಗೆ ವೃತ್ತಿಯಲ್ಲಿ ಶತ್ರುಗಳ ಕಾಟವಿದ್ದು, ಇಂದು ಹೆಚ್ಚಿನ ವ್ಯಯ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಸೋಮವಾರ, ತ್ರಯೋದಶಿ ತಿಥಿ, ರೇವತಿ ನಕ್ಷತ್ರ.

ಈ ದಿನ ಮಾಸ ಶಿವರಾತ್ರಿ ಇದ್ದು, ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ. ಇಂದು ತನ್ಮಯದಿಂದ ಈಶ್ವರನ ಪ್ರಾರ್ಥನೆ ಮಾಡಿ. ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಶತ್ರುಗಳ ಕಾಟ. ಹೆಚ್ಚಿನ ವ್ಯಯ. ಕಾಲುಗಳ ಬಾಧೆ. ವ್ಯಾಪಾರಿಗಳಿಗೆ ಅನುಕೂಲ. ಚಂಡಿ ಪಾರಾಯಣ ಮಾಡಿಸಿ. ವೃಶ್ಚಿಕ ರಾಶಿಯವರಿಗೆ ಲಾಭದಾಯಕ ದಿನ. ವೃತ್ತಿಯಲ್ಲಿ ಅನುಕೂಲ. ಆಲೋಚನಾ ಶಕ್ತಿ ಕಳೆಯಲಿದೆ. ಬಂಧು-ಮಿತ್ರರಲ್ಲಿ ಸಹಕಾರ. ಇಷ್ಟದೇವತಾರಾಧನೆ ಮಾಡಿ.

ಇದನ್ನೂ ವೀಕ್ಷಿಸಿ:  Santosh Lad Interview: ಈ ಬಾರಿ ಪ್ರಹ್ಲಾದ ಜೋಶಿ ಗೆಲ್ತಾರಾ? ಈ ಬಗ್ಗೆ ಸಂತೋಷ್‌ ಲಾಡ್ ಹೇಳಿದ್ದೇನು ?

Video Top Stories